ಕಬ್ಬು
ಕಬ್ಬು ಭಾರತದ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ ಮತ್ತು ಇದು ಸಕ್ಕರೆ ಹಾಗೂ ಅದಕ್ಕೆ ಸಂಬಂಧಿಸಿದ ಕೈಗಾರಿಕೆಗಳಿಗೆ ಪ್ರಮುಖ ಕಚ್ಚಾ ವಸ್ತುವಾಗಿದೆ.
ಇದು ಬೆಲ್ಲ ಮತ್ತು ಎಥನಾಲ್ ಉತ್ಪಾದನೆಗೂ ಬೆಂಬಲ ನೀಡುತ್ತದೆ, ಆ ಮೂಲಕ ಕೃಷಿ-ಕೈಗಾರಿಕಾ ಮೌಲ್ಯ ಸರಪಳಿಯನ್ನು ಬಲಪಡಿಸುತ್ತದೆ.
ದೊಡ್ಡ ಪ್ರಮಾಣದ ಬೇಸಾಯ ಮತ್ತು ಖಚಿತವಾದ ಮಾರುಕಟ್ಟೆ ಸಂಪರ್ಕದ ಕಾರಣದಿಂದಾಗಿ ಈ ಬೆಲೆಯು ರೈತರ ಆದಾಯಕ್ಕೆ ಅತ್ಯಂತ ಪ್ರಮುಖವಾಗಿದೆ.
ನಿಮ್ಮ ಕಬ್ಬಿನ ಬೆಳೆಗೆ ರಂಜಕ ಏಕೆ ಅಗತ್ಯ?
ಬೇರುಗಳ ಬೆಳವಣಿಗೆ ಮತ್ತು
ಕಂಕುಳು ಕುಡಿಗಳು (ಪಿಲಿಕೆಗಳು)
ರಂಜಕವು ಬೇರುಗಳ ಹರಡುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಕಂಕುಳು ಕುಡಿಗಳ (ಪಿಲಿಕೆಗಳು) ರಚನೆಯನ್ನು ಉತ್ತೇಜಿಸುತ್ತದೆ, ಇದು ಬೆಳೆ ಉತ್ತಮವಾಗಿ ಬೆಳೆದು ನಿಲ್ಲುವಂತೆ ಮಾಡುತ್ತದೆ.
ಆರಂಭಿಕ ಬೆಳವಣಿಗೆ
ಮತ್ತು ಚೈತನ್ಯ
ಇದು ಶಕ್ತಿ ವರ್ಗಾವಣೆಯನ್ನು ಬೆಂಬಲಿಸುತ್ತದೆ ಮತ್ತು ಆರಂಭಿಕ ಹಂತದಲ್ಲಿ ಸಸ್ಯದ ಕ್ಷಿಪ್ರ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಕಬ್ಬಿನ ಇಳುವರಿ ಮತ್ತು
ಸಕ್ಕರೆ ಇಳುವರಿ
ಸಮರ್ಪಕ ರಂಜಕದ ಪೂರೈಕೆಯು ಜಲ್ಲೆಯ (ಗೆಣ್ಣುಗಳ) ಬೆಳವಣಿಗೆ, ಕಬ್ಬಿನ ತೂಕ ಮತ್ತು ಸುಕ್ರೋಸ್ (ಸಕ್ಕರೆ ಅಂಶ) ಶೇಖರಣೆಯನ್ನು ಉತ್ತಮಗೊಳಿಸುತ್ತದೆ.